Wednesday, March 17, 2010

ಮನ - ಮಾತು - ಮೌನ - ಜೀವನ

"ಮಾತು ಬೆಳ್ಳಿ ಮೌನ ಬಂಗಾರ" - ಅನ್ನುವುದು ಅಕ್ಷರಶಃ ನಿಜ. ಆದರೆ ಮಾತುಗಳ ಮಧ್ಯೆ ಮೌನ ...?

ಮಾತಿನ ವರಸೆ ತನ್ನ ವಲಯ ಮಿತಿಯ ಮೀರಿದರೆ ಸಂಪೂರ್ಣ ಬೇರೆಯ ಅರ್ಥದ ಕಲ್ಪನೆ ಕೊಡುತ್ತದೆ. ಆದರೆ ಕೆಲವು ಪರಿಸ್ಥಿತಿಯಲ್ಲಿ ಮೌನವಾಗಿರುವುದೇ ಮತ್ತಷ್ಟು ಅನರ್ಥ ಉಂಟುಮಾಡಬಹುದು. ತಾನು ಏನನ್ನು ಅರ್ಥೈಸಿಕೊಂಡೆ ಅನ್ನುವುದನ್ನು ಕೇಳುಗ ಬಿಡಿಸಿ ಹೇಳಿದರೆ ಮತ್ತೊಮ್ಮೆ ಮಾತಿನ ’ನಿಜ ಅರ್ಥ’ ಎನೆಂದು ವಿವರಿಸಿ ಹೇಳಲು ಸಾಧ್ಯವಷ್ಟೇ? ಏನೂ ಅನ್ನದೆ ಸುಮ್ಮನೆ ಮನದೊಳಗೆ ಸಿಟ್ಟಿನ ಕಡಲೆ ಜಗಿದರೆ...? ಇದಕ್ಕೇ ಇರಬೇಕು , ಮಾತು ಬಲ್ಲವಗೆ ಜಗಳವಿಲ್ಲ ಅಂತ ಹಿರಿಯರು ಅಂದಿದ್ದು.

ಮನಸ್ಸೆನ್ನುವುದು ಮರ್ಕಟ ಹೌದು. ಅದರೂ ಮಾತು-ಮೌನ ಮನಸ್ಸಿಗೇ ಕನ್ನಡಿ ಆದರೆ ಬಲು ಚೆಂದ. ಆಡುವ ಮಾತು ಮುತ್ತಿನಂತಿದ್ದು ಅಂತರಂಗದಲಿ ಮಾರಿ ಹಬ್ಬ ಹೋಳಿಯಾಟ ನಡೆದರೆ ಚೆನ್ನವೇ? ಆದ್ದರಿಂದ ತಪ್ಪಿರಲಿ ಏನೇ ಆಗಲಿ.. ಮನದೊಳಗೆ ಏನನ್ನಿಸುವುದೋ ಮಾತಲ್ಲೂ ಅದೇ ಬಂದರೆ ಎಷ್ಟೋ ಸಂಬಂಧಗಳ ನಡುವೆ ತಪ್ಪು ಕಲ್ಪನೆಗೆ ಅವಕಾಶವೇ ಇರದು. ಒಮ್ಮೆಗೆ ಕೇಳಲು ಅಪ್ರಿಯವೆನಿಸಿದರೂ ಸತ್ಯ,ವಿಶ್ವಾಸಗಳೇ ಸಂಬಂಧಗಳ ಶಾಶ್ವತ ಅಡಿಪಾಯವಾಗಲಿ ಎನ್ನುವುದೇ ನನ್ನ ಹಾರೈಕೆ.

ಹೊಸ ವರುಷ ಶುರು ಮಾಡುವ ಮುನ್ನ ಇದೊಂದು ಮೂಲಮಂತ್ರ ಜೀವನದಿ ಅಳವಡಿಸಿಕೊಳ್ಳುವಂತಾಗಲಿ ಎಲ್ಲರೂ....

ಸರ್ವೇ ಜನಾಃ ಸುಖಿನೋ ಭವಂತು ||

-

2 comments:

ಗುರು said...

Its nice to read your article. good work sir.
If possible Visit my blog and put ur comments. i am expecting it so..
http://myblog-gururaj.blogspot.com/

ಉಷೈ said...

ಗುರು ಅವರೇ,

ಧನ್ಯವಾದಗಳು ಮತ್ತೊಮ್ಮೆ. ತಮ್ಮ ಬ್ಲಾಗಿಗೂ ಭೆಟ್ಟಿ ನೀಡಿದ್ದೇನೆ. ಬರೆಯುತ್ತಿರಿ ಹೀಗೇನೇ.. ಆಗಾಗ ಈ ಬ್ಲಾಗಿಗೆ ಬಂದು ತಮ್ಮ ಪ್ರತಿಕ್ರಿಯೆ ನೀಡಿರಿ.

- ಉಷೈ.